ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Last

ನಮ್ಮ ದಿನನಿತ್ಯದ ಒತ್ತಡದ ಜೀವನದಿಂದಾಗಿ ಅನೇಕರು ಪ್ರಶಾಂತ ಜೀವನವನ್ನೇ ಮರೆತುಬಿಟ್ಟಿದ್ದಾರೆ. ನಿಜವಾಗಿಯೂ ಒತ್ತಡ ಮುಕ್ತ ಮತ್ತು ಶಾಂತ ಸ್ತಿತಿ ಅಂದರೇನು ಅನ್ನೋದು ಗೊತ್ತೆಯಿಲ್ಲದಾಗಿದೆ. ಮಗುವಿನ ಮುಗ್ಧ ನಗುವನ್ನ ನೆನಪಿಸಿಕೊಳ್ಳಿ. ಅದು ನಿಮ್ಮ ಮುಖದಲ್ಲೂ ಶಾಂತ, ಸಂತೋಷದ ಭಾವನೆಯನ್ನ ಮೂಡಿಸುತ್ತದೆ. ತಾರುಣ್ಯದಲ್ಲಿ ನಾವು ಸದಾ ಜಾಗರುಕರಾಗಿ, ಶಾಂತರಾಗಿ, ಸಮತೊಲಿತವಾಗಿದ್ದರೆ ಒತ್ತಡ ಮುಕ್ತ ಜೀವನ ಸಾಧ್ಯ. 

* ನೀವು ಒತ್ತದದಲ್ಲಿದ್ದಿರಾ ಅಂತ ಕಂಡುಕೊಳ್ಳಲು ಸಲಹೆಗಳು.
' ನಾನೊಬ್ಬ ಒಳ್ಳೆಯ ವ್ಯಕ್ತಿ ' ಅಂತ ನಿಮಗೆ ನೀವೇ ಅಂದುಕೊಂಡಾಗ ನಿಮ್ಮ ಉಸಿರಾಟದಲ್ಲಾದ ಬದಲಾವಣೆಯನ್ನ ಗಮನಿಸಿದ್ದೀರಾ? ನಿಮ್ಮ ಸ್ನಾಯುಗಳು ಉದ್ವಿಗ್ನವಾಗಿವೆಯೇ? ಒತ್ತಡ ನಿಮ್ಮ ಭೌತಿಕ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ನೀವು ದಣಿದಾಗ ನಿಮ್ಮ ಕಣ್ಣುಗಳು ಭಾರವಾಗುತ್ತವೆ. ನೀವು ನಿಮ್ಮ ತಲೆಯನ್ನ ಕೈಗೆ ಆನಿಸಿ ವಿಶ್ರಾಂತಿ ಪಡೆಯುತ್ತೀರಿ. ನೀವು ಖಿಶಿಯಾಗಿದ್ದಾಗ , ಸುಲಭವಾಗಿ ನಗುತ್ತಿರಿ. ಅಂತೆಯೇ ಒತ್ತಡವು ಕೂಡ ನಿಮ್ಮ ದೇಹಕ್ಕೆ ಸುಳಿವು ನೀಡುತ್ತದೆ. ಹೀಗಾಗಿ ನಿಮ್ಮ ದೇಹ ನಿಮ್ಮ ಮನಸ್ಸಿಗೆ ನಿಡುವ ಸುಳಿವಿನ ಬಗ್ಗೆ ಗಮನಹರಿಸಿ.

* ನಿಮ್ಮ ಸ್ನಾಯುಗಳನ್ನ ಗಮನಿಸಿ. ಅವು ಬಿಗಿಯಾಗಿವೆಯೇ ಅಥವಾ ಸಡಿಲವಾಗಿವೆಯೇ?
* ನಿಮ್ಮ ಉಸಿರಾಟವನ್ನ ಗಮನಿಸಿ. ನೀವು ನಿಟ್ಟುಸಿರು ಬಿಡುತ್ತ ಇದ್ದೀರಾ? ಅಥವಾ ಜೋರಾಗಿ ಉಸಿರಾಡುತ್ತಿದ್ದಿರಾ? ಈಗ ಒಂದು ಕೈಯನ್ನ ನಿಮ್ಮ ಎದೆಯಮೇಲು ಮತ್ತೊಂದು ಕೈಯನ್ನ ಹೊಟ್ಟೆಯ ಮೇಲೂ ಇಡಿ. ನಿಮ್ಮ ಉಸಿರಾಟದ ಏರಿಳಿತವನ್ನ ಗಮನಿಸಿ. ಒತ್ತಡದಿಂದಾಗಿ ನೀವು ಉಸಿರಾಡೋದನ್ನೇ ಮರೆತುಬಿಟ್ಟಿದ್ದೀರಾ?

* ನಿಮ್ಮ ದಾಹದ ಒತ್ತಡದ ಪ್ರತಿಕ್ರಿಯಯನ್ನ ಗುರುತಿಸಿ.
ಆಂತರಿಕವಾಗಿ, ನಾವೆಲ್ಲರೂ ಒತ್ತಡಕ್ಕೆ ಒಂದೇ ರೀತಿ ಪ್ರತಿಕ್ರಿಯಿಸುತ್ತೇವೆ. ಒತ್ತಡದಲ್ಲಿದ್ದಾಗ ನಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಸಾಮಾನ್ಯವಾಗಿ ನಾವು ಒತ್ತಡದಲ್ಲಿದ್ದಾಗ ಮೂರು ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಒಂದೋ ಆ ಸ್ಥಳ ಬಿಟ್ಟು ಹೊರ ನಡೆದರೆ, ಮತ್ತೆ ಕೆಲವರು ಕೋಪಗೊಂಡು ಕ್ಷೋಭೆಗೊಳಗಾಗುತ್ತಾರೆ. ಇನ್ನೂ ಕೆಲವರು ಹೆದರಿಕೊಂಡು ಬಿಡುತ್ತಾರೆ.
!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-6

ನಮ್ಮ ದಿನನಿತ್ಯದ ಒತ್ತಡದ ಜೀವನದಿಂದಾಗಿ ಅನೇಕರು ಪ್ರಶಾಂತ ಜೀವನವನ್ನೇ ಮರೆತುಬಿಟ್ಟಿದ್ದಾರೆ. ನಿಜವಾಗಿಯೂ ಒತ್ತಡ ಮುಕ್ತ ಮತ್ತು ಶಾಂತ ಸ್ತಿತಿ ಅಂದರೇನು ಅನ್ನೋದು ಗೊತ್ತೆಯಿಲ್ಲದಾಗಿದೆ. ಮಗುವಿನ ಮುಗ್ಧ ನಗುವನ್ನ ನೆನಪಿಸಿಕೊಳ್ಳಿ. ಅದು ನಿಮ್ಮ ಮುಖದಲ್ಲೂ ಶಾಂತ, ಸಂತೋಷದ ಭಾವನೆಯನ್ನ ಮೂಡಿಸುತ್ತದೆ. ತಾರುಣ್ಯದಲ್ಲಿ ನಾವು ಸದಾ ಜಾಗರುಕರಾಗಿ, ಶಾಂತರಾಗಿ, ಸಮತೊಲಿತವಾಗಿದ್ದರೆ ಒತ್ತಡ ಮುಕ್ತ ಜೀವನ ಸಾಧ್ಯ. 

* ನೀವು ಒತ್ತದದಲ್ಲಿದ್ದಿರಾ ಅಂತ ಕಂಡುಕೊಳ್ಳಲು ಸಲಹೆಗಳು.
' ನಾನೊಬ್ಬ ಒಳ್ಳೆಯ ವ್ಯಕ್ತಿ ' ಅಂತ ನಿಮಗೆ ನೀವೇ ಅಂದುಕೊಂಡಾಗ ನಿಮ್ಮ ಉಸಿರಾಟದಲ್ಲಾದ ಬದಲಾವಣೆಯನ್ನ ಗಮನಿಸಿದ್ದೀರಾ? ನಿಮ್ಮ ಸ್ನಾಯುಗಳು ಉದ್ವಿಗ್ನವಾಗಿವೆಯೇ? ಒತ್ತಡ ನಿಮ್ಮ ಭೌತಿಕ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ನೀವು ದಣಿದಾಗ ನಿಮ್ಮ ಕಣ್ಣುಗಳು ಭಾರವಾಗುತ್ತವೆ. ನೀವು ನಿಮ್ಮ ತಲೆಯನ್ನ ಕೈಗೆ ಆನಿಸಿ ವಿಶ್ರಾಂತಿ ಪಡೆಯುತ್ತೀರಿ. ನೀವು ಖಿಶಿಯಾಗಿದ್ದಾಗ , ಸುಲಭವಾಗಿ ನಗುತ್ತಿರಿ. ಅಂತೆಯೇ ಒತ್ತಡವು ಕೂಡ ನಿಮ್ಮ ದೇಹಕ್ಕೆ ಸುಳಿವು ನೀಡುತ್ತದೆ. ಹೀಗಾಗಿ ನಿಮ್ಮ ದೇಹ ನಿಮ್ಮ ಮನಸ್ಸಿಗೆ ನಿಡುವ ಸುಳಿವಿನ ಬಗ್ಗೆ ಗಮನಹರಿಸಿ.

* ನಿಮ್ಮ ಸ್ನಾಯುಗಳನ್ನ ಗಮನಿಸಿ. ಅವು ಬಿಗಿಯಾಗಿವೆಯೇ ಅಥವಾ ಸಡಿಲವಾಗಿವೆಯೇ?
* ನಿಮ್ಮ ಉಸಿರಾಟವನ್ನ ಗಮನಿಸಿ. ನೀವು ನಿಟ್ಟುಸಿರು ಬಿಡುತ್ತ ಇದ್ದೀರಾ? ಅಥವಾ ಜೋರಾಗಿ ಉಸಿರಾಡುತ್ತಿದ್ದಿರಾ? ಈಗ ಒಂದು ಕೈಯನ್ನ ನಿಮ್ಮ ಎದೆಯಮೇಲು ಮತ್ತೊಂದು ಕೈಯನ್ನ ಹೊಟ್ಟೆಯ ಮೇಲೂ ಇಡಿ. ನಿಮ್ಮ ಉಸಿರಾಟದ ಏರಿಳಿತವನ್ನ ಗಮನಿಸಿ. ಒತ್ತಡದಿಂದಾಗಿ ನೀವು ಉಸಿರಾಡೋದನ್ನೇ ಮರೆತುಬಿಟ್ಟಿದ್ದೀರಾ?

* ನಿಮ್ಮ ದಾಹದ ಒತ್ತಡದ ಪ್ರತಿಕ್ರಿಯಯನ್ನ ಗುರುತಿಸಿ.
ಆಂತರಿಕವಾಗಿ, ನಾವೆಲ್ಲರೂ ಒತ್ತಡಕ್ಕೆ ಒಂದೇ ರೀತಿ ಪ್ರತಿಕ್ರಿಯಿಸುತ್ತೇವೆ. ಒತ್ತಡದಲ್ಲಿದ್ದಾಗ ನಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಸಾಮಾನ್ಯವಾಗಿ ನಾವು ಒತ್ತಡದಲ್ಲಿದ್ದಾಗ ಮೂರು ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಒಂದೋ ಆ ಸ್ಥಳ ಬಿಟ್ಟು ಹೊರ ನಡೆದರೆ, ಮತ್ತೆ ಕೆಲವರು ಕೋಪಗೊಂಡು ಕ್ಷೋಭೆಗೊಳಗಾಗುತ್ತಾರೆ. ಇನ್ನೂ ಕೆಲವರು ಹೆದರಿಕೊಂಡು ಬಿಡುತ್ತಾರೆ.
!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-5

ಚಿಂತೆಗಳನ್ನ ಪ್ರಶ್ನಿಸುವುದರ ಮೂಲಕ ಚಿಂತಿಸೋದನ್ನ ನಿಲ್ಲಿಸಿ. 
* ನೀವು ಚಿಂತಿಸುತ್ತಿರುವ ಸಂಗತಿ ಸತ್ಯ ಅನ್ನೋದಕ್ಕೆ ಸಾಕ್ಷಿ ಇದೆಯೇ? ಅಥವಾ ಸಲ್ಲು ಅನ್ನೋದಕ್ಕೆನಾದರು ಪುರಾವೆ ಇದೆಯೇ?
* ನಾನು ಹೆದರುತ್ತಿರುವ ವಿಷಯಗಳು ವಾಸ್ತವವಾಗಿ ಘಟಿಸುವ ಸಾಧ್ಯತೆ ಎಷ್ಟಿದೆ?
* ಒಂದು ವೇಳೆ ವಾಸ್ತವಿಕವಾಗಿ ಘಟಿಸುವ ಸಂಭವನೀಯತೆ ಕಡಿಮಯಿದ್ದರೆ, ಮತ್ಯಾಕೆ ಈ ವಿಷಯ ನಿಮ್ಮನ್ನ ಬಾಧಿಸುತ್ತಿದೆ?
* ಈ ಚಿಂತನೆ ನನಗೆ ಸಹಾಯಕವಾಗಿದೆಯೆ? ಇದು ನನಗೆ ಹೇಗೆ ಸಹಾಯಕವಾಗಿದೆ ಮತ್ತು ಹೇಗೆ ನನ್ನನ್ನ ಘಾಸಿಗೊಳಿಸುತ್ತಿದೆ?
* ಇಂಥದ್ದೇ ಸಮಸ್ಯೆ ಹೊಂದಿರುವ ನನ್ನ ಸ್ನೇಹಿತನ ಬಳಿ , ನಾನು ಏನೆಂದು ಹೇಳಿಕೊಳ್ಳಲಿ?

ಸಾಮಾನ್ಯವಾಗಿ ಚಿಂತೆ ಅನ್ನೋದು ಭವಿಷ್ಯದಲ್ಲಿ ನಾವೇನು ಮಾಡುತ್ತೇವೆ ಅನ್ನೋದರ ಮೇಲೆ ಕೇಂದ್ರಿಕೃತವಾಗಿರುತ್ತದೆ. ಶತ ಶತಮಾನಗಳಷ್ಟು ಹಳೆಯದಾದ ಅಭ್ಯಾಸ ಸಾವಧನತೆ; ಪ್ರಸ್ತುತ ನಿಮ್ಮನ್ನ ಚಿಂತೆ ಮುಕ್ತ ಮಾಡಲು ಸಹಾಯ ಮಾಡಬಹುದು. 


* ನಿಮ್ಮ ಆಸಕ್ತಿ, ಚಿಂತನೆ, ಭಾವನೆಗಳನ್ನ ಗಮನಿಸಿ ಮತ್ತು ಅಂಗೀಕರಿಸಿ. ನಿಮ್ಮ ಚಿಂತನೆಯನ್ನ ನಿರ್ಲಕ್ಷಿಸಬೇಡಿ, ಅವುಗಳ ಜೊತೆ ಹೊರಡಬೇಡಿ. ಮತ್ತು ನಿಯಂತ್ರಿಸಲು ಸಹ ಪ್ರಯತ್ನಿಸಬೇಡಿ; ಬದಲಾಗಿ ಚಿಂತೆಯನ್ನ ಹೊರಗಿನವರ ದೃಷ್ಟಿಕೋನದಿಂದ ಗಮನಿಸಿ. 
* ನೀವು ಹೆಚ್ಚು ಚಿಂತೆಗೆ ಒತ್ತು ಕೊಡದಿದ್ದಾಗ ಅವು ಮೋಡ ಸರಿದಷ್ಟು ಸಲಿಸಾಗಿ ನಿಮ್ಮ ಬಾಳಿಂದ ಸರಿದುಹೊಗುತ್ತವೆ ಅನ್ನೋದನ್ನ ನೆನಪಿಡಿ. 
* ಯಾವಾಗಲು ವಾಸ್ತವಿಕವಾಗಿರಿ. ಇಂದಿನ ಬಗ್ಗೆ ಯೋಚಿಸಿ. ನಿಮ್ಮ ದೇಹವನ್ನೇ ಗಮನಿಸಿ, ನಿಮ್ಮ ಉಸಿರಾಟದ ಲಯ ಬದ್ಧ ಸಂಗೀತವನ್ನ ಆಸ್ವಾದಿಸಿ, ದಿನ ನಿತ್ಯ ಬದಲಾಗುವ ನಿಮ್ಮ ಭಾವನೆಗಳನ್ನ ಗಮನಿಸಿ. ಇವೆಲ್ಲ ನಿಮ್ಮ ಗಮನವನ್ನ ಪ್ರಸ್ತುತ ಕ್ಷಣಗಳಿಗೆ ಮರಳುವಂತೆ ಮಾಡುತ್ತವೆ.

ಒಂದು ಸಂಶೋಧನೆಯ ಪ್ರಕಾರ ಭಾವನೆಗಳು ಸಾಂಕ್ರಾಮಿಕವಂತೆ. ಹೀಗಾಗಿ ನಕಾರಾತ್ಮಕವಾಗಿ ಯೋಚಿಸುವ ಜನರಿಂದ ಆದಷ್ಟು ದೂರವಿರಿ. ನೀವು ಯಾರ ಜೊತೆ ಹೆಚ್ಚು ಸಮಯ ಕಳೆಯುತ್ತಿರೋ ಅವರು ನಿಮ್ಮ ಮಾನಸಿಕ ಸ್ತಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಾರೆ.

* ಒಂದು ಚಿಂತೆಯ ಡೈರಿ ನಿಮ್ಮ ಜೋತೆಯಲ್ಲಿರಲಿ. ನಿಮಗೆ ಗೊತ್ತಿಲ್ಲದೇ ಬಹಳಷ್ಟು ಜನರು, ಬಹಳಷ್ಟು ಸನ್ನಿವೇಶಗಳಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಬಹುದು. ಯಾವಾಗ, ಯಾರ ಜೊತೆಯಲ್ಲಿದ್ದಾಗ ಚಿಂತೆ ನಿಮ್ಮನ್ನ ಹೆಚ್ಚಾಗಿ ಕಾಡುತ್ತದೆಯೋ ಅದನ್ನ ಬರೆದಿಡಿ. ಅದಕ್ಕೆ ಕಾರಣವೇನು ಅನ್ನೋದನ್ನ ಸಹ ಬರೆಯಿರಿ.

* ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುವಂತ ವ್ಯಕ್ತಿಗಳಿಂದ ದೂರವಿರಿ.

ನಿಮ್ಮ ಬಗ್ಗೆ ಕಾಳಜಿಯಿರುವಂತಹ ವ್ಯಕ್ತಿಗಳನ್ನ ಗುರುತಿಸಿ. ಕೆಲವರು ನಿಮ್ಮ ಚಿಂತೆ, ಸಂಶಯ ಮತ್ತು ಆತಂಕಕ್ಕೆ ಕಾರಣವಾದರೆ, ಮತ್ತೆ ಕೆಲವರು ನಿಮ್ಮ ಆತ್ಮವಿಶ್ವಾಸವನ್ನ ಹೆಚ್ಚಿಸಲು ಸಹಾಯ ಮಾಡಬಹುದು. 

* ಬಹುಬೇಗ ಚಿಂತೆಯಿಂದ ಮುಕ್ತಿ ಪಡೆಯೋದು ಹೇಗೆ?

ಎಂದಾದರು ಒಬ್ಬ ಒತ್ತಡದಿಂದ ಬಳಲಿ ಬೆಂಡಾದ ಸೂಪರ್ ಹಿರೋ ನಿಮ್ಮನ್ನ ಟ್ರಾಫಿಕ್ ಜಾಮ್ ನಿಂದ, ಅಸ್ತವ್ಯಸ್ತವಾದ ಸಭೆಗಳಿಂದ, ದತ್ತ ಕಾನನಗಳಿಂದ ಉಳಿಸಬಲ್ಲನೆ? ಇಲ್ಲ ಅಲ್ಲವೇ?. ಆದರೆ ನೀವು ಒತ್ತಡವನ್ನ ನಿಯಂತ್ರಿಸುವ ಸೂಪರ್ ಹಿರೋ ಆಗಬಹುದು. ಪ್ರತಿಯೊಬ್ಬರಿಗೂ ಅಂತದ್ದೊಂದು ಶಕ್ತಿ ಇದ್ದೆಯಿದೆ. ಸತತ ಪ್ರಯತ್ನದಿಂದ ಒತ್ತಡದ ಸನ್ನಿವೇಶಗಳ ಮೇಲಿನ ನಿಯಂತ್ರಣ ಖಂಡಿತ ಸಾದ್ಯ.
!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-4

ನೀವು ಅನಿಶ್ಚಿತತೆ ಮತ್ತು ಅಸಹಿಷ್ಣು ಗಳಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ, ನಿಮಗೆ ನೀವೇ ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳಿ ಮತ್ತು ಅದಕ್ಕೆ ಪ್ರತಿಕ್ರಿಯಯನ್ನ ಸಹ ಬರೆದಿಡಿ.
* ಜೀವನ ಅಂದ್ರೆ ಇದೆ, ಹೀಗೆ, ಇಷ್ಟೇ ಅಂತ ಹೇಳಲು ಸಾಧ್ಯನ?
* ಜೀವನದಲ್ಲಿ ನಿಶ್ಚಿತ ವಾಗಿ ಇರೋದ್ರಿಂದ ಆಗೋ ಉಪಯೋಗಗಳು ಮತ್ತು ದುರುಪಯೋಗಗಳು ಏನು? 
* ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅನಿಶ್ಚಿತತೆಯೇ ಕಾರಣವಾ? 
* ಕೆಟ್ಟದ್ದು ಸಂಭವಿಸಿದರೆ ,ಸಂಭವಿಸಲಿ ಅಂತ ಧೃಢವಾಗಿ ಇರೋಕೆ ನಿಮ್ಮಿಂದ ಸಾಧ್ಯನಾ?

ನೀವು ಸದಾ ತೀವ್ರ ಆತಂಕ ಮತ್ತು ಚಿಂತೆಗಳಿಂದ ಬಳಲುತ್ತಿದ್ದರೆ, ನಿಮ್ಮ ಕಣ್ಣಿಗೆ ಇಡೀ ಪ್ರಪಂಚ ಅಪಾಯಕಾರಿಯಾಗಿ ಗೋಚರಿಸುತ್ತದೆ. ಇಡೀ ವಿಶ್ವವೇ ನಿಮ್ಮ ವಿರುದ್ಧವಿದೆ ಅನ್ನೋ ಭಾವನೆ ಮೂಡುತ್ತದೆ. ಉದಾಹರಣೆಗೆ ನೀವು ಚಿಕ್ಕ ಚಿಕ್ಕ ಘಟನೆಯ ಬಗ್ಗೆಯೂ ಹೆಚ್ಚೆಚ್ಚಾಗಿ ಯೋಚಿಸಿ, ಭಯಾನಕ ಸನ್ನಿವೇಶಗಳನ್ನ ಕಲ್ಪಿಸಿಕೊಳ್ಳುತ್ತಿರಿ. ಸಣ್ಣ ಸಮಸ್ಯೆಯನ್ನ ಎದುರಿಸಬೇಕಾದರು ಭಯಪಡುತ್ತಿರಿ. ಸದಾ ನಕಾರಾತ್ಮಕ ವಾಗಿ ಯೋಚಿಸಿ, ನೀವು ನಿಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರಿ. ಇಂತಹ ವಿವೇಚನಾರಹಿತ, ನಿರಾಶಾವಾದಿ ವರ್ತನೆಯನ್ನ ಅರಿವಿನ ವಿರೂಪಗಳು ಅಂತ ಅನ್ನುತ್ತಾರೆ. ಇಂತಹ ಕೆಟ್ಟ ಚಿಂತೆಗಳಿಗೆ ಆಹಾರ ವಾಗುವ ಬದಲು, ನಿಮ್ಮ ಚಿಂತೆ ಮತ್ತು ಆತಂಕಗಳನ್ನ ನಿಯಂತ್ರಿಸಲು ನಿಮ್ಮ ಮನಸ್ಸು ಮತ್ತು ಮೆದುಳನ್ನ ತರಬೇತಿಗೊಳಿಸಿ. 

ಸಾಧ್ಯವಾದಷ್ಟು ನೀವು ಯಾವ ಭಯಾನಕ ಚಿಂತೆಗಳು ನಿಮ್ಮ ಭಯಕ್ಕೆ ಮತ್ತು ಚಿಂತೆಗೆ ಕಾರಣವಾಗುತ್ತವೆ ಅನ್ನೋದನ್ನ ಗರುತಿಸಲು ಪ್ರಾರಂಭಿಸಿ. ನಂತರ ಅವುಗಳ ಬಗ್ಗೆ ಆಲೋಚಿಸುವ ಬದಲಾಗಿ ಪರಿಹಾರ ಕಂಡುಕೊಳ್ಳಲು ಶುರುಮಾಡಿ. ನೀವು ಹೆಚ್ಚೆಚ್ಚು ಸಮಸ್ಯೆಗಳನ್ನ ಪರಿಶಿಲಿಸಿದಷ್ಟು ನಿಮ್ಮ ಚಿಂತೆ, ಆತಂಕಗಳು ಮತ್ತು ಸವಾಲುಗಳ ಬಗ್ಗೆ ಹೆಚ್ಚು ಸಮತೋಲನ ದೃಷ್ಟಿ ಕೋನದಿಂದ ನೋಡಲು ಪ್ರಾರಂಭ ಮಾಡುತ್ತಿರಿ. 

!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-4


* ಬಗೆಹರಿಸಲಾಗದ ಸಮಸ್ಯೆಗಳ ಜೊತೆ ವ್ಯವಹರಿಸೋದು ಹೇಗೆ? 


ಚಿಂತೆಯನ್ನ ನೀವು ಹೇಗೆ ಬಗೆಹರಿಸಬಹುದು? ದೀರ್ಘಕಾಲ ದಿಂದ ನಿಮ್ಮನ್ನ ಕೊಳ್ಳುತ್ತಿರುವ ಚಿಂತೆಗಳು ನಿಮ್ಮನ್ನ ಒಟ್ಟಾಗಿ ಬಾಧಿಸಬಹುದು. ಅಂತ ಸಮಯದಲ್ಲಿ ನೀವು ಭಾವನಾತ್ಮಕವಾಗಿ ಗತ್ತಿಯಗೋದು ಒಳ್ಳೆಯದು. 


ಮೊದಲೇ ಹೇಳಿದಂತೆ ಚಿಂತೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಮಾನಸಿಕವಾಗಿ ಕುಗ್ಗಬಾರದು. ಕೆಲವೊಮ್ಮೆ ನೀವು ತಾತ್ಕಾಲಿಕವಾಗಿ ಪ್ರಕ್ಷುಭ್ದರಾಗಬಹುದು , ಹಿಂದೆಯೇ ಆತಂಕ ನಿಮ್ಮನ್ನ ಕಾಡಲು ಶುರುಮಾಡಬಹುದು. ಅಂತ ಸಮಯದಲ್ಲಿ ನೀವು ' ನನಗೇ ಯಾಕೆ ಹಿಗಗುತ್ತಿದೆ? ನಾನು ಈ ತರಹ ಯೋಚಿಸಬಾರದು?' ಅಂತನೂ ಅನ್ನಿಸಬಹುದು. ಇಂತಹ ವಿಷವರ್ತುಲದಿಂದ ಹೊರಬರುವ ಏಕೈಕ ಮಾರ್ಗವೆಂದರೆ ಭಾವನಾತ್ಮಕವಾಗಿ ಸಮಸ್ಯೆಗಳನ್ನ ಎದುರಿಸೋದನ್ನ ಕಲಿಯೋದು. ನಕಾರಾತ್ಮಕ ನಂಬಿಕೆಗಳು ನಿಮ್ಮನ್ನ ಬೆದರಿಸಬಹುದು, ನನ್ನ ಯೋಚನೆಗಳು ತರ್ಕಬದ್ಧವಾಗಿಯೂ , ನಿಯಂತ್ರಣ ದಲ್ಲಿಯೂ ಇರಬೇಕು ಅಥವಾ ನನಗೇ ಭಯ ಮತ್ತು ಕೋಪದ ಮೇಲೆ ನಿಯಂತ್ರಣ ವಿದೆ ಅಂತ ಭಾವಿಸಬೇಕು. 


ನಿಮ್ಮ ಭಯಗಳು, ಭಾವನೆಗಳು ನೈಸರ್ಗಿಕವಾದವು ಅಂತ ಅರ್ಥಮಾಡಿಕೊಳ್ಳಿ. ಕಷ್ಟ, ಚಿಂತೆ, ದುಃಖ, ಸಮಸ್ಯೆಗಳು ಮಾನವ ಜೀವನದ ಒಂದು ಭಾಗ ಅನ್ನೋದನ್ನ ತಿಳಿದುಕೊಳ್ಳಿ. ಆಗ ಮಾತ್ರ ನಿಮಗೆ ಸಮಸ್ಯೆ ಎದುರಿಸೋ ಶಕ್ತಿ ಬರುತ್ತೆ. ಈ ಸಲಹೆಗಳು ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಭಾವನೆಗಳ ನಡುವೆ ಒಂದು ಉತ್ತಮ ಸಮತೋಲನವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತವೆ. 


ಅನಿಶ್ಚಿತತೆ ಅನ್ನೋದು ಚಿಂತೆ ಮತ್ತು ಆತಂಕವನ್ನ ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಆಗಬಹುದಾದ ತಪ್ಪುಗಳನ್ನೇ ಚಿಂತಿಸುತ್ತಾ ಹೋದರೆ ಉಪಯೋಗವಿಲ್ಲ. ನೀವು ಭವಿಷ್ಯದ ಬಗ್ಗೆ ಚಿಂತಿಸಿದಷ್ಟು , ನಿಮ್ಮ ಭವಿಷ್ಯ ಸುರಕ್ಷಿತವಾಗಿರಬಹುದು ಅಂತ ಭಾವಿಸಿದರೆ ಅದು ನಿಮ್ಮ ಭ್ರಮೆಯಷ್ಟೇ. ನೀವು ನಿಮ್ಮ ಮುಂಬರುವ ದಿನಗಳಲ್ಲಿ ಬರೀ ಕೆಟ್ಟದ್ದನ್ನೇ ಪಟ್ಟಿಮಾಡಿದರೆ ಹೇಗೆ? ಅದನ್ನೆಲ್ಲ ಬಿಟ್ಟು ಪ್ರಸಕ್ತ ಸಮಯವನ್ನ ಆನಂದಿಸೋದನ್ನ ಕಲೆತುಕೊಳ್ಳಿ. 

!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-3

* ಬಗೆಹರಿಸಬಹುದಾದ ಮತ್ತು ಬಗೆಹರಿಸಲಾರದ ತಲ್ಲಣಗಳ ನಡುವಿನ ವ್ಯತ್ಯಾಸ. 
ಒಂದು ವೇಳೆ ನಿಮಗೆ ನೀವೇ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಲ್ಲಬಲ್ಲಿರಿ ಅಂತ ಅನ್ನಿಸಿದರೆ, ಈ ಕೆಲವೊಂದು ಪ್ರಶ್ನೆಗಳು ನಿಮಗೆ ಉಪಯೋಗವಾಗಬಹುದು. 



೧.ಪ್ರಸ್ತುತ ನೀವು ಸಮಸ್ಯೆಯನ್ನ ಎದುರಿಸುತ್ತಾ ಇದ್ದೀರಾ? ಅಥವಾ ಅದು ಕಾಲ್ಪನಿಕ ಸಮಸ್ಯೆಯೇ?
೨. ಒಂದುವೇಳೆ ಸಮಸ್ಯೆ ಕಾಲ್ಪನಿಕವಾಗಿದ್ದರೆ, ಅದು ನಿಜವಾಗಿಯೂ ನಿಮ್ಮ ಜೀವನದಲ್ಲಿ ಸಂಭವಿಸ ಬಹುದೇ? ಆ ಸಮಸ್ಯೆಯ ಬಗ್ಗೆ ನಿಮಗಿರುವ ಕಾಳಜಿ ವಾಸ್ತವಿಕವೇ?

೩ ನಿಮ್ಮ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ನೀವೇನಾದರೂ ತಯಾರಿ ಮಾದಿಕೊಂಡಿದ್ದಿರಿಯೇ? ಅಥವಾ ಪರಿಸ್ಥಿತಿ ನಿಮ್ಮ ಕೈ ತಪ್ಪಿ ಹೋಗಿದೆಯೇ?

ಸಮಸ್ಯೆಯನ್ನ ಪರಿಹರಿಸೋದ್ರಿಂದ ನಿಮಗೆ ಉಪಯೋಗವಾಗುತ್ತಿದ್ದರೆ, ತಕ್ಷಣವೇ ಅದನ್ನ ಬಗೆಹರಿಸಿ. ಉದಾಹರಣೆಗೆ ನೀವು ನಿಮ್ಮ ಬಿಲ್ಲುಗಳನ್ನ ಹೇಗೆ ಪವತಿಸೋದು ಅಂತ ಯೋಚಿಸುತ್ತಿದ್ದರೆ ಕೂಡಲೇ ಬಿಲ್ಲುಗಳಿಗೆ ಸಂಬಂಧ ಪಟ್ಟವರನ್ನ ಸಂಪರ್ಕಿಸಿ ಹಣ ಪವತಿಸಿಬಿಡಿ. ಹೀಗೆ ಮಾಡೋದ್ರಿಂದ ನಿಮ್ಮ ಸಮಸ್ಯೆ ಪರಿಹಾರವಾಗುತ್ತೆ. ಒಂದುವೇಳೆ ನಿಮ್ಮ ಸಮಸ್ಯೆ ಅನುಪಯುಕ್ತ ವಾಗಿದ್ದರೆ ಅದರ ಬಗ್ಗೆ ಚಿಂತಿಸೋದನ್ನ ಬಿಟ್ಟುಬಿಡಿ. ಉದಾಹರಣೆಗೆ ' ಮುಂದೊಂದು ದಿನ ನಾನು ಕ್ಯಾನ್ಸರ್ ಗೆ ತುತ್ತಾದರೆ ಏನು ಮಾಡಬೇಕು?. ಅಥವಾ ' ನನ್ನ ಮಕ್ಕಳಿಗೆ ಅಪಘಾತವಾದರೆ ಹೇಗೆ? ಅಂತ ಯೋಚಿಸೋದನ್ನ ಬಿಟ್ಟುಬಿಡಿ. 

ಒಂದುವೇಳೆ ನಿಮ್ಮ ಚಿಂತೆ ಬಗೆಹರಿಯೋವಂತಾಗಿದ್ದರೆ ಅದರ ಬಗ್ಗೆ ಹೆಚ್ಚೆಚ್ಚಾಗಿ ಯೋಚಿಸಿ. ನೀವು ಪರಿಹಾರದ ಎಲ್ಲ ಸಂಭಾವ್ಯ ಪಟ್ಟಿಯನ್ನ ತಯಾರಿಸಿ. ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯದಿದ್ದರೂ ತಕ್ಕ ಮಟ್ಟಿಗೆ ಪರಿಹರಿಸಬಹುದು. ನಿಮಗೆ ಯಾವ ಸಮಸ್ಯೆ ಬಗೆಹರಿಸಲು ಸಾಧ್ಯವೋ ಅದರ ಕಡೆಗೆ ಹೆಚ್ಚು ಗಮನ ಕೊಡಿ. ಸಮಸ್ಯೆಯ ಮೌಲ್ಯಮಾಪನದ ನಂತರ ಬಗೆಹರಿಸೋ ವಿಧಾನವನ್ನ ಕಾರ್ಯ ರೂಪಕ್ಕೆ ತನ್ನಿ. ಆನಂತರ ತಂತಾನೇ ನೀವು ಸಮಸ್ಯೆಗಳ ಬಗ್ಗೆ ಚಿಂತಿಸೋದನ್ನ ಕಡಿಮೆಮಾಡುತ್ತಿರಿ. 


!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-2

ನಿಮಗೆ ಸಂಪೂರ್ಣವಾಗಿ ಚಿಂತಿಸದೆ ಇರಲು ಸಾಧ್ಯವಾಗುತ್ತಿಲ್ಲ ಅಂತ ಆದ್ರೆ , ಸಮಸ್ಯಗೆ ಅಂತಾನೆ ಒಂದು ಸಮಯ ಕೊಟ್ಟುಬಿಡಿ.
* ಚಿಂತೆಯನ್ನ ಮುಂದೆ ಹಾಕೋ ಕಲೆಯನ್ನ ಕಲೆತುಕೊಳ್ಳಿ.



೧. ಚಿಂತೆ ಮಾಡೋ ಸಮಯವನ್ನ ನಿಗದಿ ಪಡಿಸಿ. ಚಿಂತೆ ಮಾಡೋದಕ್ಕೆ ಅಂತಾನೆ ಒಂದು ಸ್ತಳ ಮತ್ತು ಸಮಯವನ್ನ ಆರಿಸಿ. ಉದಾಹರಣೆಗೆ , ನಿಮ್ಮ ಪಡಸಾಲೆ, ಸಮಯ ೫..ರಿಂದ ೫.೨೦. ಹೀಗೆ ನಿಗದಿ ಪಡಿಸಿದ ಮೇಲೆ ಯಾವುದೇ ಕಾರಣಕ್ಕೂ ಆ ಸಮಯಕ್ಕಿಂತ ಮೊದಲು ಸಮಸ್ಯೆಗಳ  ಬಗ್ಗೆ ಯೋಚಿಸಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ಇಡೀ ದಿನವನ್ನ ನೀವು ಸಂತೋಷದಿಂದ ಕಳೆಯಬಹುದು.

೨. ಚಿಂತೆಯಲ್ಲ ಮುಂದೆ ಹಾಕಿ. ನೀವು ಯಾವುದಾದರು ಕೆಲಸ ಮಾಡುತ್ತಿದ್ದಾಗ ನಿಮ್ಮ ಕಷ್ಟಗಳ ಬಗ್ಗೆ ನೆನಪಾದರೆ ತಕ್ಷಣ ಅದನ್ನ ಪೇಪರ್ ಮೇಲೆ ಪಟ್ಟಿ ಮಾಡಿ, ಮತ್ತು ಆ ಕಷ್ಟದ ಬಗ್ಗೆ ಯೋಚಿಸೋದನ್ನ ಚಿಂತೆಯ ಸಮಯಕ್ಕೆ ಮುಂದೂಡಿ. ನಿಮಗೆ ನೀವೇ, ನನಗೆ ಇದರ ಬಗ್ಗೆ ಚಿಂತಿಸಲು ನಿರ್ಧಿಷ್ಟ ಸಮಯವಿದೆ ಅಂತ ಅಂದುಕೊಳ್ಳಿ. ಹೀಗೆ ಮಾಡೋದ್ರಿಂದ ನೀವು ನಿಮ್ಮ ದಿನದ ಬಹುಕಾಲದ ಸಮಯವನ್ನ ಸಂತೋಷದಿಂದ ಕಳೆಯಬಹುದು.

೩. ದಿನವೂ ನಿಮ್ಮ 'ಚಿಂತೆಯ ಪಟ್ಟಿ'ಯನ್ನ ನಿಗದಿ ಪಡಿಸಿದ ಸಮಯದಲ್ಲಿ ಪರಿಶೀಲಿಸುತ್ತಿರಿ. ಒಂದು ವೇಳೆ ನೀವು ಎಷ್ಟೇ ಪ್ರಯತ್ನಿಸಿದರೂ ಚಿಂತೆ ನಿಮ್ಮನ್ನ ಬಾದಿಸುತ್ತಿದ್ದರೆ ಆ ಸಮಸ್ಯೆಗೆ ಹೆಚ್ಚು ಸಮಯ ಕೊಡಿ. ಒಂದು ವೇಳೆ ಪಟ್ಟಿಯಲ್ಲಿರುವ ಕೆಲವು ಚಿಂತೆಗಳಿಗೆ ಈಗ ನಿಮ್ಮ ಜೀವನದಲ್ಲಿ ಮಹತ್ವ ವಿರದಿದ್ದರೆ ಅಂತ ಚಿಂತೆಗಳನ್ನ ಪಟ್ಟಿಯಿಂದ ತೆಗೆದು ಹಾಕಿ, ನಿಮ್ಮ ದಿನವನ್ನ ಆನಂದಿಸಿ.

ಈ ಅಭ್ಯಾಸ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಯಾಕಂದ್ರೆ, ಚಿಂತಿಸೋದಕ್ಕೆ ಅಂತಾನೆ ಒಂದು ಸಮಯ ನಿಗದಿ ಪಡಿಸಿದಾಗ ನೀವು ನಿಮ್ಮ ಬಹಳಷ್ಟು ಸಮಯವನ್ನ ಉಳಿಸಬಹುದು. ಅಷ್ಟೇ ಅಲ್ಲದೆ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನೂ ಕಂಡುಕೊಳ್ಳಬಹುದು. ಕೆಲವು ಸಂಶೋಧನೆಗಳ ಪ್ರಕಾರ, ನಿಮ್ಮನ್ನ ಚಿಂತೆ ಆವರಿಸಿ ಕೊಂಡಿದ್ದಾರೆ, ನೀವು ಜೀವನದ ಮೇಲೆ ಕಡಿಮೆ ಆಸಕ್ತಿ ತೋರುವ ಸಾಧ್ಯತೆ ಇದೆಯಂತೆ.

ಸದಾ ಚಿಂತೆಯ ಬಗ್ಗೆಯೇ ಯೋಚಿಸುತ್ತಿದ್ದರೆ ಅದು ನಿಮ್ಮನ್ನ ಭಾವನಾತ್ಮಕವಾಗಿ ಕುಗ್ಗಿಸುತ್ತದೆ. ಚಿಂತೆ ಮಾಡುವವರು, ಚಿಂತೆ ಮಾಡೋದು ಮತ್ತು ಸಮಸ್ಯೆ ಬಗೆಹರಿಸೋದು ಎರಡು ಬೇರೆ ಬೇರೆ ವಿಚಾರ ಅನ್ನೋದನ್ನ ಅರ್ಥೈಸಿಕೊಳ್ಳಬೇಕು. ಸಮಸ್ಯೆಯ ಸನ್ನಿವೇಶವನ್ನ ಅರ್ಥಮಾಡಿಕೊಳ್ಳೋದು, ಸಮಸ್ಯೆಯನ್ನ ಬಗೆಹರಿಸಲು ಕೆಲವು ಮಾರ್ಗಗಳನ್ನ ಅನುಸರಿಸೋದು, ಅದರ ಮೌಲ್ಯಮಾಪನ ಮಾಡೋದ್ರಿಂದ ಸಮಸ್ಯೆ ಗಳನ್ನ ಬಗೆಹರಿಸಬಹುದು. ಬರಿ ಚಿಂತೆ ಮಾಡೋದ್ರಿಂದ ಸಮಸ್ಯೆ ಪರಿಹಾರವಾಗೋದಿಲ್ಲ, ಬದಲಾಗಿ ಅದು ನಿಮ್ಮನ್ನ ಮಾನಸಿಕವಾಗಿ ಕುಗ್ಗಿಸುತ್ತದೆ. 

!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ?

ಹಳೆಯ ಚಿಂತೆಗಳು ಸಹ ನಿಮ್ಮನ್ನ ಕಾಡಬಹುದು. ಕೆಲವೊಮ್ಮೆ ಅದು ಸಕಾರಾತ್ಮಕವಾಗಿಯೂ ಮತ್ತೆ  ಕೆಲವೊಮ್ಮೆ  ನಕಾರಾತ್ಮಕವಾಗಿಯೂ ಇರಬಹುದು. ನಕಾರಾತ್ಮಕವಾಗಿ ಹೇಳೋದಾದ್ರೆ , ಚಿಂತೆ ಬರಿ ನಿಮ್ಮ ಮಾನಸಿಕ ಆರೋಗ್ಯದ ಮೇಲಷ್ಟೇ ಅಲ್ಲದೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 

ಚಿಂತೆ ಮಾಡೋದರ ಸಕಾರಾತ್ಮಕ ಅಂಶ ಅಂದ್ರೆ ನೀವು ಎಂತ ಸನ್ನಿವೇಶ ಬಂದ್ರು, ಕಠಿಣ ಸಮಸ್ಯೆ ಎದುರಾದರು ಎದುರಿಸೋ ಧೈರ್ಯ ಬರುತ್ತೆ.

ಚಿಂತೆ ಮಾಡೋದ್ರಿಂದ ಯಾವಾಗಲು ಸಹಾಯವಾಗುತ್ತೆ ಅನ್ನೋದು ತಪ್ಪು ಕಲ್ಪನೆ. ಚಿಂತೆ ಮಾಡೋದ್ರಿಂದ ನಷ್ಟವೇ ಹೊರತು ಲಾಭವಿಲ್ಲ ಅಂತ ತಿಳಿದಾಗ ಮಾತ್ರ ನಿಮ್ಮ ಮನಸ್ಸು ಚಿಂತೆ ಮಾಡೋದನ್ನ ನಿಲ್ಲಿಸುತ್ತೇ. ಚಿಂತೆ ಎಂಬ ಭೂತ ಸದಾ ನಿಮ್ಮ ಬೆನ್ನು ಹತ್ತಿ ಬಿಟ್ಟರೆ ಯಾವ ಕೆಲಸವೂ ಸಾಧ್ಯವಾಗೋದಿಲ್ಲ. ಚಿಂತೆ ಅನ್ನೋದು ಚಿತೆಯ ವರೆಗೂ ಜೊತೆಗೆ ಬರುತ್ತೆ ಅನ್ನೋ ಮಾತಿದೆ. ಪದೇ ಪದೇ ನೆನಪಗೋ ತಪ್ಪುಗಳು ನಿಮ್ಮನ್ನ ಘಾಸಿಗೊಳಿಸಬಹುದು. ಹೀಗಾಗಿ ಕೆಲವು ಧೃಡ ನಿರ್ಧಾರ ತೆಗೆದುಕೊಳ್ಳೋದು ಅವಶ್ಯಕ. 

ನಿಮ್ಮನ್ನ ನೀವೇ ಪರೀಕ್ಷಿಸಿಕೊಳ್ಳಲು ಹೀಗೆ ಮಾಡಿ : ಕಣ್ಣು ಮುಚ್ಚಿ ಗುಲಾಬಿ ಬಣ್ಣದ ಆನೆಯನ್ನ ಕಲ್ಪಿಸಿಕೊಳ್ಳಿ. ಒಮ್ಮೆ ನಿಮಗೆ ಗುಲಾಬಿ ಆನೆ ಕಂಡ ತಕ್ಷಣ ಅದರ ಬಗ್ಗೆ ಚಿಂತಿಸೋದನ್ನ ನಿಲ್ಲಿಸಿಬಿಡಿ. ಏನೇ ಆದ್ರೂ ಮುಂದಿನ ಕೆಲ ನಿಮಿಷಗಳ ತನಕ ಆನೆಯನ್ನ ನೆನೆಸಿ ಕೊಳ್ಳಲೆ  ಬೇಡಿ. ಈಗ ನಿಮಗೆ ಹೀಗೆ ಅನ್ನಿಸುತ್ತಿದೆ? ಇನ್ನೂ ನಿಮ್ಮ ತಲೆಯಲ್ಲಿ ಗುಲಾಬಿ ಆನೆ ಸುಳಿಯತ್ತಾ  ಇದೆಯೇ? ಗುಲಾಬಿ ಆನೆಯನ್ನ ಮನಸಿಂದ ತೆಗೆಯಲು ಕಷ್ಟವಾಗುತ್ತಿದೆಯಲ್ಲ? ನಿಜ. ನಾವು ಯಾವುದನ್ನ ಯೋಚಿಸಬಾರದು ಅಂತ ಅಂದುಕೊಳ್ಳುತ್ತಿವೋ ,ಅವೇ ಯೋಚನೆಗಳನ್ನ ನಮ್ಮ ಸ್ಮೃತಿ ಪಟಲ ಮರುಕಳಿಸುತ್ತೆ. ಹಾಗಂತ ನೀವು ನಿಮ್ಮ ಯೋಚನೆ,ಮನಸ್ಸು , ಮಿದುಳಿನ ಮೇಲೆ ಹಿಡಿತ ಸಾಧಿಸಲಾಗದು ಅಂತ ಅರ್ಥವಲ್ಲ . ಆದ್ರೆ ಅದಕ್ಕೆ ಅನುಸರಿಸೋ ಮಾರ್ಗ ಬೇರೆಯಿದೆ. 

!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ?

ಚಿಂತೆ ನಿಮಗೆ ಒಂದು ಸಮಸ್ಯೆಯನ್ನ ಪರಿಹರಿಸಲು ಪ್ರೇರಣೆ ನಿಡುತ್ತಿದ್ದರೆ ಅದು ಒಳ್ಳೆಯದು. ಆದರೆ ಅದೇ ಚಿಂತೆ ನಿಮ್ಮನ್ನು ಮುಂದೆ ಬರುವ ಕಷ್ಟದ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂದು ಭಯಭೀತಿ ಗೊಳಿಸಿದರೆ ಆ ಚಿಂತೆ ಒಂದು ಸಮಸ್ಯೆಯೇ ಸರಿ. ಸಂಶಯ ಮತ್ತು ಆತಂಕಗೊಲಿಸುಮ ಚಿಂತೆಗಳು ನಿಮ್ಮನ್ನ ನಿಷ್ಕ್ರಿಯ ಗೊಳಿಸಬಹುದು. ಆತಂಕ ಹೆಚ್ಚಾಗುತ್ತಿದ್ದಂತೆ ನಿಮ್ಮ ಭಾವನಾತ್ಮಕ ಶಕ್ತಿ ಕುಗ್ಗಿ ಚಿಂತೆ ನಿಮ್ಮ ದಿನ ನಿತ್ಯದ ಬದುಕಿನ ಶಾಂತಿಯನ್ನ ಸಹ ಕೆಡಿಸುತ್ತದೆ. ಚಿಂತೆ ಅನ್ನೋದು ನಮ್ಮನ್ನ ಬಹುಕಾಲ ಬಾಧಿಸುವ ಮಾನಸಿಕ ಸ್ವಭಾವ. ಹೀಗಾಗಿ ನೀವು ಹೆಚ್ಚೆಚ್ಚು ಸಕಾರಾತ್ಮಕ ದೃಷ್ಟಿಕೋನದಿಂದ ಬದುಕಲು, ಶಾಂತವಾಗಿರು ನಿಮ್ಮ ಮನಸ್ಸು, ಮೆದುಳನ್ನ ತರಬೇತಿಗೊಳಿಸಿ. 


ನಮಗೆ ಚಿಂತಿಸದೆ ಇರುವುದಕ್ಕೆ  ಸಾಧ್ಯವಾಗೋದಿಲ್ಲ ಯಾಕೆ?  

ನಾವು ಯಾಕೆ ಚಿಂತಿಸಬೇಕು?ನೀವು ನಿಮ್ಮ  ತಲ್ಲಣಗಳ ಬಗ್ಗೆ ಮಿಶ್ರ ಭಾವನೆಗಳನ್ನ ಹೊಂದಿದ್ದೀರಿ. ನಿಮ್ಮನ್ನ ಚಿಂತೆಗಳು ಬಾಧಿಸುತ್ತಿದ್ದರೆ, ನಿಮಗೆ ಸರಿಯಾಗಿ ನಿದ್ದೆಮಾಡಲು ಸಾಧ್ಯವಾಗೋದಿಲ್ಲ. ನಿರಾಶದಾಯಕ ಆಲೋಚನೆಗಳು ಸದಾ ನಿಮ್ಮನ್ನು ಬಾಧಿಸುತ್ತಿರುತ್ತವೆ. ಆ ಸಮಯದಲ್ಲಿ ನೀವು ನಾನು ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಲ್ಲೇ ಅಂತ ಅನ್ನಿಸಲೂ ಬಹುದು. ಉದಾಹರಣೆಗೆ, ನೀವು * ನಾನು ಈ ಸಮಸ್ಯೆಗೆ ಪರಿಹಾರ ಹುಡುಕಬಲ್ಲೆ.* ನಾನು ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ.* ನಾನು ಸಮಸ್ಯೆಗಳ ಬಗ್ಗೆ ಹೆಚ್ಚೆಚ್ಚು ಯೋಚಿಸಿದಷ್ಟು , ಸಮಸ್ಯೆಯನ್ನ ಅರ್ಥೈಸಿ ಕೊಳ್ಳಬಲ್ಲೆ.* ನಾನು ಆಶ್ಚರ್ಯ ವಾಗೋದಿಲ್ಲ.* ನಾನು ಜವಾಬ್ದಾರಿಯುತವಾಗಿ ವರ್ತಿಸುತ್ತೇನೆ.

ನಿಮಗೆ ಚಿಂತೆಗಳ ಬಗ್ಗೆ ಚಿಂತಿಸೋದು ಕಡಿಮೆ ಮಾಡಲು ಕಷ್ಟವಾಗುತ್ತದೆ ಯಾಕಂದ್ರೆ ಚಿಂತೆ ಈಗಾಗಲೇ ನಿಮ್ಮನ್ನ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಸತತವಾಗಿ ಚಿಂತಿಸುತ್ತಲೇ ಇದ್ದಾರೆ ಮುಂದೆ ನೀವು ದೊಡ್ಡ ಮೊತ್ತವನ್ನೇ ತೆರಬೇಕಾದಿತು. ಚಿಂತೆ ರಾತ್ರಿ ನಿಮ್ಮ ನಿದ್ದೆಯನ್ನ ಕದ್ದರೆ, ಬೆಳ್ಳಿಗ್ಗೆ ನಿಮ್ಮನ್ನ ಉದ್ವಿಗ್ನ ಗೊಳಿಸಬಹುದು. ಚಿಂತೆ ನಿಮಗೆ ನಿಮ್ಮ ಮೇಲೆಯೇ ದ್ವೇಷ ಉಂಟಾಗುವಂತೆ ಮಾಡಬಹುದು. ಅದ್ದರಿಂದ ಚಿಂತೆಗಳ ಬಗ್ಗೆ ಚಿಂತಿಸುವುದನ್ನ ನಿಲ್ಲಿಸೋದು ಕಷ್ಟವಾಗುತ್ತದೆ. 

!-- Facebook share button Start -->

ಶ್ರೀ ಮಂಜುನಾಥ - ಆನಂದ ಪರಮಾನಂದ

ಚಿತ್ರ: ಶ್ರೀ ಮಂಜುನಾಥ
ಸಂಗೀತ : ಹಂಸಲೇಖ
ರಚನೆ : ಹಂಸಲೇಖ
ಗಾಯಕ : ಎಸ್ ಪಿ ಬಿ , ಚಿತ್ರ 
ಆನಂದ ಪರಮಾನಂದ
ಆನಂದ ಪರಮಾನಂದ
ತಾಯಿ ತಂದ ಜನ್ಮದಿಂದ ಜಗದಾನಂದ
ಗುರುವು ತಂದ ಪುಣ್ಯದಿಂದ ಜನುಮನಂದ
ನಿ ರೀ ... ರೀ ... ರೀ ... ನಿ ರೀ ... ನಿ ... ರೀ ...
ಆನಂದ ಪರಮಾನಂದ ... ಪರಮಾನಂದ
ಬಾಳಿನ ಜೊತೆ ಬಂದ ಸಕಲಕು ಸಮನಾದ ಮಡದಿಯ ನೆರಳಿಂದ ಧರ್ಮಾನಂದ
ಹೃದಯದ ನೋವನ್ನು ಪ್ರೀತಿಯ ಸುಧೆ ಮಾಡಿ ನಾಲ್ವರ ನಗಿಸುವುದೇ ಮನುಜಾನಂದ
ಬೆಲ್ಲದ ಕನದೊಳಗೆ ಬೇವಿನ ಎಲೆ ಇರುವ ...
ಬೆಲ್ಲದ ಕನದೊಳಗೆ ಬೇವಿನ ಎಲೆ ಇರುವ, ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ನಿ ರೀ ... ರೀ ... ರೀ ... ನಿ ರೀ ... ನಿ ... ರೀ ...
ಆನಂದ ಪರಮಾನಂದ ... ಪರಮಾನಂದ
ವಂಶದ ಲತೆಯಲ್ಲಿ ಅಂಶದ ಸುಮವಾಗಿ ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತ್ತೆವರ ಒಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಫಲದಲ್ಲಿ ಮಗನು
ದಾನ ಧರ್ಮಗಳ ಫಲದಲ್ಲಿ ಮಗನು, ನೂರು ಕಾಲ ಬಾಳಿದಾಗ ಪುನ್ಯಾನಂದ
ನಾವು ತಂದ ಪುಣ್ಯದಲ್ಲೇ ನಮಗಾನಂದ 
ನಿ ರೀ ... ರೀ ... ರೀ ... ನಿ ರೀ ... ನಿ ... ರೀ ...
ಆನಂದ ಪರಮಾನಂದ ... ಪರಮಾನಂದ

ಪರಮಾನಂದ… ಪರಮಾನಂದ
!-- Facebook share button Start -->

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ - ಶ್ರೀನಿವಾಸ ಕಲ್ಯಾಣ

ಚಿತ್ರ : ಶ್ರೀನಿವಾಸ ಕಲ್ಯಾಣ
ಗಾಯಕ : ಎಸ್ ಪಿ . ಬಾಲಸುಬ್ರಮಣ್ಯ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ 
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ...
ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ...
ಧನ್ಯನಾಗುವೆ ಇಂದು ಕರುಣಿಸೋ ದಯ ಮಾಡಿ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ 
ಇರುಳು ಮುಗಿಯದೆ ಇರಲಿ .. ಹಗಲು ಮೂಡದೆ ಇರಲಿ ..
ಅನುಗಾಲ ಸೇವೆ ಸಾಗುತಲೇ ಇರಲಿ
ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ
ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ
ನಿನ್ನ ಕಾಣದೆ ಜೀವ ಕ್ಷಣ ಕಾಲ ನಿಲ್ಲದಯ್ಯ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ 

ಶ್ರೀ ವೆಂಕಟೇಶ ... ಸಪ್ತಗಿರಿವಾಸ 
!-- Facebook share button Start -->

ಕಂಬದ ಮ್ಯಾಲಿನ ಗೊಂಬೆಯೇ - ನಾಗಮಂಡಲ

ಚಿತ್ರ : ನಾಗಮಂಡಲ
ಸಂಗೀತ : ಸಿ ಅಶ್ವಥ್
ಗಾಯಕಿ : ಸಂಗೀತಾ ಕಟ್ಟಿ 
ಕಂಬದ ಮ್ಯಾಲಿನ ಗೊಂಬೆಯೇ ... ನಂಬಲೇನ ನಿನ್ನ ನಗೆಯನ್ನ
ಬಿತ್ತಿಯ ಮ್ಯಾಲಿನ ಚಿತ್ತಾರವೇ ... ಚಿತ್ತ ಗೊಟ್ಟ ಹೇಳೇ ಉತ್ತಾರವ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೊಂಡಿಹೇನ ... ಮಬ್ಬು ಹರಿಯುವುದೇನ
ಹಬ್ಬವಾಗುವುದೆನಾ
ಕಂಬದ ಮ್ಯಾಲಿನ ಗೊಂಬೆಯೇ ... ನಂಬಲೇನ ನಿನ್ನ ನಗೆಯನ್ನ
ಬಿತ್ತಿಯ ಮ್ಯಾಲಿನ ಚಿತ್ತಾರವೇ ... ಚಿತ್ತ ಗೊಟ್ಟ ಹೇಳೇ ಉತ್ತಾರವ
(ನೀರೋಳೆಯ ನಿಗಿ ಕೆಂಡ ಸತ್ಯವೇ
ಅಭ್ಯಂಜನವಿನ್ನು ನಿತ್ಯವೇ
ಒಳ್ಳೇ ಗಮಗುಡುತಿಯಲ್ಲೇ ಸೀಗೆಯೇ
ನಿನ್ನ ವಾಸನೆಯೇ ಹರಡಿರಲಿ ಹೀಗೆಯೇ )-2
ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೊಂಡಿಹೇನ ... ಮಬ್ಬು ಹರಿಯುವುದೇನ
ಹಬ್ಬವಾಗುವುದೆನಾ
(ಒಪ್ಪಿಸುವೆ ಹೂ ಹಣ್ಣು ಭಗವಂತ
ನೆಪ್ಪಿಲೆ ಹರಸುಣಗಿ ಇರಲೆಂತ
ಕರ್ಪೂರವ ಬೆಳಗುವೆ ದೇವನೇ
ತಪ್ಪದೇ ಬರಲೆನ್ನ ಗುಣವಂತ)-2
ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೊಂಡಿಹೇನ ... ಮಬ್ಬು ಹರಿಯುವುದೇನ
ಹಬ್ಬವಾಗುವುದೆನಾ

ಕಂಬದ ಮ್ಯಾಲಿನ ಗೊಂಬೆಯೇ ... ನಂಬಲೇನ ನಿನ್ನ ನಗೆಯನ್ನ
ಬಿತ್ತಿಯ ಮ್ಯಾಲಿನ ಚಿತ್ತಾರವೇ ... ಚಿತ್ತ ಗೊಟ್ಟ ಹೇಳೇ ಉತ್ತಾರವ
!-- Facebook share button Start -->

ತುಂಬಾ ನೋಡ್ಬೇಡಿ - ಅಣ್ಣಾ ಬಾಂಡ್

ಚಿತ್ರ : ಅಣ್ಣಾ ಬಾಂಡ್
ಸಂಗೀತ : ವಿ ಹರಿಕೃಷ್ಣ
ರಚನೆ : ಯೋಗರಾಜ್ ಭಟ್
ಗಾಯಕ : ವಿ ಹರಿಕೃಷ್ಣ
ತಾರಾಗಣ : ಪುನೀತ್ ರಾಜಕುಮಾರ್ , ಪ್ರಿಯಾಮಣಿ, ನಿಧಿ ಸುಬ್ಬಯ್ಯ 
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ತಡನ್ ಟನ್ ಡಾನ್
ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ
ಸೆನ್ಟರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ... ಎತ್ತಲೇ ಎತ್ತಲೇ
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಕನ್ನಡಿಗೆ ನಾನ್ ಕಣ್ಣು ಹೊಡಿತೀನಿ
ಲೈಟು ಕಂಬಕೆ ಡಿಕ್ಕಿ ಹೊಡಿತೀನಿ
ಗಂಟೆಗೆ ಒಂದ್ಸಲ ತಲೆ ಬಾಚ್ತೀನಿ
ತಡನ್ ಟನ್ ಡಾನ್
ಪ್ರಿಯಾಮಣಿ ಯಾಮಾರಿ, ಒಮ್ಮೆ ತಿರುಗಿ ನೋಡಿದರೆ, ಹೊಟ್ಟೆಯೊಳಗೆ ಚಿಟ್ಟೆನಾ ಬಿಟ್ಟಂಗ್ ಆಯ್ತದೆ
ಇವಳೊಮ್ಮೆ ನಕ್ಕರೇ ... ಫ್ರೀ ಸೈಟು ಸಿಕ್ಕರೇ ... ಸೆನ್ಟರಲ್ಲಿ ನಾನು ತಾಜು ಮಹಲು ಕಟ್ಟಲೇ ಕಟ್ಟಲೇ
ಎತ್ತಲೇ ಎತ್ತಲೇ …
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಕೆಲ್ಸಕ್ ಹೋದರೆ ಸಂಬ್ಳ ಕೊಡ್ತಾರೆ
ಬ್ಯಾಂಕಿಗ್ ಹೋದರೆ ಸಾಲ ಕೊಡ್ತಾರೆ
ಪ್ರೀತಿಯೋಳಗದೆ ಏನು ಸಿಗ್ತದೆ
ತಡನ್ ಟನ್ ಡಾನ್
ಲವ್ವು ಕಂಫಾರ್ಮ್ ಆಗ್ದೇನೆ , ಫ್ರೆಂಡ್ಸು ಹತ್ರ ಮಾತಾಡಿ, ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ
ಹೇಳ್ತಾನೆ ಹೋದರೆ ,
ಮುಗಿಯಲ್ಲ ಮಾನ್ಯರೇ, ಸೆನ್ಟರಲ್ಲಿ ನನ್ನ ಹುಡ್ಗಿ ನಂಗೆ ಬೈತಾಳೆ ಬೈತಾಳೆ
ಎತ್ತಲೇ ... ಎತ್ತೋಲೆ 

ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ತಡನ್ ಟನ್ ಡಾನ್
!-- Facebook share button Start -->

ಆಲೋಚನೆ ಆರಾಧನೆ - ರೋಮಿಯೋ

ಚಿತ್ರ : ಅರ್ಜುನ್ ಜನ್ಯ
ರಚನೆ : ಕವಿರಾಜ್
ಗಾಯಕಿ : ಶ್ರೇಯಾ ಘೋಷಾಲ್ 
ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಾವಿಬ್ಬರೂ ಒಂದಾದರೆ ಖಂಡಿತ
ಜೀವನ ಅಲ್ಲಿಂದಲೇ ಅದ್ಭುತ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೇ ಸುಳ್ಳು ನನಗೆ ನಿನ್ನ ವಿನಃ
ಯಾರೋ ನನಗೆ ನೀನು 
ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು ... ಮನುಜನೋ ಗಂಧರ್ವನೋ
ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡ ನೋಡದಂತೆ ನಡಿದೆಯಾ
ಹುಡುಗಿಯ ಹೀಗೆ ಹೆದರಿಸ ಬೇಡ ಕಣೋ
ಅಂದು ನೀನು ಆಗುಂತಕ ... ಇಂದು ನೀನೇ ನನ್ನಾ ಸಖಾ
ಕನಸಿಗಿಂತ ಸೊಗಸು ನಿನ್ನಾ ಸನಿಹ
ಜಗವೇ ಸುಳ್ಳು ನನಗೆ ನಿನ್ನಾ ವಿನಃ
ಯಾರೋ ನನಗೆ ನೀನು
ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
 ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆದರೆ ಇನ್ನು ತಡೆಯೆನು ನಾ ನನ್ನನು
ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕಿ ಆದ ಹಾಗೆ ಹಸಿ ನೆಲ
ಬೆವರುವೆ ಯಾಕೋ ... ಅರಳುವೆ ನಾನೆತಕೋ
ಕೇಳೋ ಆಸೆ ಆಲಿಂಗನ ... ಯಾಕೋ ನಾಚಿ ನೀರಾದೆನಾ 

ಕನಸಿಗಿಂತ ಸೊಗಸು ನಿನ್ನಾ ಸನಿಹ
ಜಗವೇ ಸುಳ್ಳು ನನಗೆ ನಿನ್ನಾ ವಿನಃ
ಯಾರೋ ನನಗೆ ನೀನು
!-- Facebook share button Start -->

ಫಸ್ಟ್ ಟೈಮ್ ನಿನ್ನ ನೋಡಿದಾಗ - ಸತ್ಯವಾನ್ ಸಾವಿತ್ರಿ

ಚಿತ್ರ : ಸತ್ಯವಾನ್ ಸಾವಿತ್ರಿ
ಸಂಗೀತ : ಗುರುಕಿರಣ್
ಗಾಯಕಿ ; ಲಕ್ಷ್ಮಿ 
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವ್ರಿಟೈಮ್ ನಿನ್ನ ನೋಡಿದಾಗ ಕದ್ದೆ ನೀ ನನ್ನ ಮೆಲ್ಲ
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು

ಸದ್ದೇ ಇಲ್ಲದೇ .. ನಿದ್ದೇ ಇಲ್ಲದೇ ... ಒದ್ದಾಡೋ ಹಾಗೆ ಮಾಡಿದೆ
ಕದ್ದು ನೋಡಿದೆ ... ಮುದ್ದು ಮಾಡಿದೆ... ಎದ್ದಾಗ ಎಲ್ಲಿ ಓಡಿದೆ
ಕನ್ನಡಿ ಮುಂದೆ ನಾ ನಿಂತರೂನು ಕಾಣುವೆ ನಂಗೆ ನೀನು
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ಲವ್ ಯೂ ಕಣೋ .... ... ಲವ್ ಯೂ ಕಣೋ .... ...
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು

ಎಲ್ಲೇ ಇದ್ದರೂ ... ಎಲ್ಲೇ ಹೋದರೂ... ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ ... ಒಲ್ಲೆ ಎಂದರೂ... ಲಲ್ಲೆ ಗರೆದು ಮಲ್ಲೆ ಮೂಡಿಸುವೆ -
ಕಂಡೆನು ನಿನ್ನನೆ ಟಿವಿಯಲ್ಲಿ ... ಎಲ್ಲಾ ಚಾನ್ನಲ್ಲಿನಲ್ಲಿ
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವ್ರಿಟೈಮ್ ನಿನ್ನ ನೋಡಿದಾಗ ಕದ್ದೆ ನೀ ನನ್ನ ಮೆಲ್ಲ 
!-- Facebook share button Start -->

ಮಿಡಿವ ನಿನ್ನ -ರಾಜಧಾನಿ

ಚಿತ್ರ : ರಾಜಧಾನಿ
ಸಂಗೀತ : ಅರ್ಜುನ್ ಜನ್ಯ
ಗಾಯಕ : ಸೋನು ನಿಗಮ್
ಗಾಯಕಿ : ಶ್ರೇಯಾ ಘೋಷಾಲ್ 
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತ ... ನವಿರಾಗಿ ಏನನ್ನು ಹೇಳುತ
ನನ್ನನು ಅಪಹರಿಸಿದೆ ನೀನು...
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ 
(ಕಣ್ಣ ಮುಚ್ಚೆ ಕಾದೆ ಗೋಡೆ ... ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ... ಬಿಟ್ಟೆ ಬಿಟ್ಟೆ )
ಇಲ್ಲೇ ಎಲ್ಲೋ ನೀನು ಅವಿತಿರುವಂತೆ ಖುಷಿಪಡುತಿದೆ ಮೈಮನ
ಚಂದ ಚಂದ ನೂರು ಕರೆಯನು ಮಾಡಿ ಪಿಸುಗುಡುತಿದೆ ಯೌವನ
ಋತುಮಾನಕು ಬಣ್ಣ ಬಂತು ... ಇಡೀ ದಿನ ಕಾಯುತ
ಅತಿಯಾಸೆಗು ಭಾಷೆ ಬಂತು ... ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ ... ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ... ಅಪಹರಿಸಿದೆ ನೀನು ... 
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಒಂದೇ ಒಂದು ಮಾತು ನುಡಿಯದೆ ನೀನುಕನವರಿಕೆಯ ಆಲಿಸು
ಎಂದೂ ಕೂಡ ನಿನ್ನ ಜೊತೆ ಇರುವಂತೆ ಕನಸನ್ನು ದಯಪಾಲಿಸು
ಅಪರೂಪದ ನಿನ್ನ ರೂಪ ... ಸಮೀಪವೇ ಕಾದಿದೆ
ದಿನ ರಾತ್ರಿಯು ಇನ್ನು ಇದೆ ಕಥೆಯಾಗಿದೆ
ಅಂಗೈನೆ ಬೆರಳಿಂದ ಗೀರುತ ... ಮುದ್ದಾದ ಬೆಳಕನ್ನು ಬೀರುತ
ನನ್ನನು ... ಅಪಹರಿಸಿದೆ ನೀನು 

ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
!-- Facebook share button Start -->