ಕೆಂಪಾದೋ ಕೆಂಪಾದೋ - ಯಾರೇ ಕೂಗಾಡಲಿ

ಚಿತ್ರ :ಯಾರೇ ಕೂಗಾಡಲಿ
ಸಂಗೀತ : ವಿ ಹರಿಕೃಷ್ಣ
ಗಾಯಕ : ಕೈಲಾಶ್ ಖೇರ್
ನಿರ್ದೇಶನ : ಸಮುದ್ರಖನಿ 

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಅರ ಹೊಯ್ .. ಅರ ಹೊಯ್ ..
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ
ಮನ್ಸನನ್ನ ಮುಟ್ಟಿ ಕಪ್ಪಾದೋ
ಅರ ಹೊಯ್ ..
ಕಾಲಿಂಗ ನಿನ್ನ ಕಲ್ಲು ಮಾಡಿಬಿಟ್ಟರೋ
ಹೇಯ್ ರಂಗ ನಿನ್ನ ಮಲಗಿಸಿಬಿಟ್ಟರೋ
ತತ್ತೆರಿತೆರಿ ತತ್ತೆರಿತೆರಿ ಹಿತ್ಮೆಲಿದು ಅವರೇಕಾಳು
ಎಂತದೋ ಇದು ಎಂತದೋ ಇದು ಬುದ್ಧಿ ಇರದ ಮಂಶನ ಬಾಳು 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ

ಬೆಟ್ಟ ಗುಡ್ಡ ಎಲ್ಲಾ ಖಾಲಿ.. ಎಲ್ಲ ನುಂಗಿ ನೀರು ಕುಡಿದ
ಮಯ್ಯ ತುಂಬಾ ರೋಗ ಪಡೆದ
ಹಾಕ್ಬಿಟ್ಟ ಎಲ್ಲದಕ್ಕೂ ಬೇಲಿ .. ನಾನು ನನ್ನದೆಂದು ನೋಡಿದ
ಮನ್ಸು ಮನ್ಸುಗಳ ಹೊಡೆದ 

ಜೊತೆಗಿದ್ದು ಬೆನ್ನಲ್ಲಿ ಚೂರಿ ಇಟ್ಟರು
ನೀ ಹೋಗೋ ದಾರೀಲಿ ಮುಳ್ಳು ನೆಟ್ಟರು
ಯಾರೇ ಕೂಗಾಡಲಿ .. ಅರ ಹೊಯ್ .. ಅರ ಹೊಯ್ .. ಅರ ಹೊಯ್
ಹೋಗೋ ಸರಿ ದಾರೀಲಿ .. ಅರ ಹೊಯ್ .. ಅರ ಹೊಯ್ .. ಅರ ಹೊಯ್ 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಕಾಲನ್ನು ಎಳಿತಾರೆ ಸ್ವಾಮಿ .. ಮೇಲೆ ಹತ್ತಲಿಕ್ಕೆ ಬಿಡರು
ಅಯ್ಯೋ ತಾವೂ ಕೂಡ ಹತ್ತರು
ಮಾನಕ್ಕೆ ಅಂಜೋದಿಲ್ಲ ಸ್ವಾಮಿ
ನಾವು ಉಪ್ಪು ತಿಂದ ಮನೆಗೆ .. ಅನ್ನ ಹಾಕುವಂತ ಜನರು 
ಸರಿಯಾದ ದಾರಿಯಲ್ಲಿ ಯಾರು ಹೋಗಲ್ಲ
ನೀ ಹೋದ್ರು ಅಡ್ಬಾಯಿ ಹಾಕ್ದೆ ಬಿಡಲ್ಲ
ಯಾರೇ ಕೂಗಾಡಲಿ .. ಅರ ಹೊಯ್...  ಅರ ಹೊಯ್... ಅರ ಹೊಯ್...
ಹೋಗೋ ನಿನ್ನ ದಾರೀಲಿ.. ಅರ ಹೊಯ್...  ಅರ ಹೊಯ್... ಅರ ಹೊಯ್...

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಅರ ಹೊಯ್ .. ಅರ ಹೊಯ್ ..
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ
ಮನ್ಸನನ್ನ ಮುಟ್ಟಿ ಕಪ್ಪಾದೋ
!-- Facebook share button Start -->

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ

ಚಿತ್ರ: ದೇವತಾ ಮನುಷ್ಯ
ಸಂಗೀತ: ಚಿ. ಉದಯ್ ಶಂಕರ್
ಗಾಯನಡಾ. ರಾಜ್ ಕುಮಾರ್
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ ||
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ
ಆಆ ಹಾ ಆಆ ಹಾಆಆ ಆಆಆಆಆಆ....
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲಿ ಒಣಗಿಸು, ನೆರಳಲ್ಲಿ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ ನಗುನಗುತ ಇರುವೆ ರಾಘವೇಂದ್ರ
ಹಾಲಲ್ಲಾದರು ಹಾಕು ||
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಹಾ ಹಾ ಆಆ ಹಾಆಆ ಆಆಆಆಆಆ....
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೇ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ
ಹಾಲಲ್ಲಾದರು ಹಾಕು ||
!-- Facebook share button Start -->

ನೀ ಹಿಂಗ ನೋಡಬ್ಯಾಡ ನನ್ನ

ರಚನೆ: . ರಾ. ಬೇಂದ್ರೆ
ಗಾಯನ: ಸಿ. ಅಶ್ವಥ್

ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ,
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲಿ ಆಚೆಯ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,
ನಾ ತಡಿಲಾರೆ ಅದು ಯಾಕ ನೋಡತೀ, ಮತ್ತ ಮತ್ತ ನೀ ಇತ್ತ
ತಂಬಳ ಹಾಕದ ತುಂಬಾ ಕೆಂಪು ಗಿಣಿ ಗದಕ ಹಣ್ಣಿನ ಹಂಗ,
ಇದ್ದಂತ ತುಟಿಯ ಬಣ್ಣೆತ್ತ ಹಾರಿತು, ಯಾವ ಘಳಿಗೆ ಹಿಂಗ?
ಗತ್ತಗಲ್ಲ ಹನಿ ಕಣ್ಣು ಕಂಡು, ಮಾರಿಗೆ ಮಾರಿಯ ರೀತಿ,
ಸವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ,
ನೀ ಹಿಂಗ ನೋಡಬ್ಯಾಡ ನನ್ನ

ಇಬ್ಬನಿ ತೊಳೆದರು ಹಾಲು ಮೆಟ್ಟಿದ ಕವಲಿ ಕಾಂತಿಯ ಹಣ್ಣು
ಹೊಳೆ ಹೊಳೆವ ಹಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಕಣ್ಣು,
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ,
ಹುಣ್ಣಿಮಿ ಚಂದಿರನ ಹೆಣ ಬಂತೋ ಮುಗಿಲಾಗ ತೆಲತಾ ಹಗಲ,
ನಿನ್ನ ಕಣ್ಣಿನಾಗ ಕಾಲೂರಿ ಮಳೆಯೂ, ನಡ ನಡಕ ಹುಚ್ಚು ನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವಕ,
ಅತ್ತರೆ ಅತ್ತು ಬಿಡು ಹೊನಲು ಬರಲಿ, ನಾಕ್ಯಾಕ ಮರಸತಿ ದುಃಖ,
ಎದೆ ಬಿರಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ,

ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ,

ತಿರುಗಿ ನಾ ಹೆಂಗ ನೋಡಲೇ ನಿನ್ನ?
!-- Facebook share button Start -->

ದೀಪವು ನಿನ್ನದೇ ಗಾಳಿಯು ನಿನ್ನದೇ

ಚಿತ್ರ: ಮೈಸೂರು ಮಲ್ಲಿಗೆ
ರಚನೆ: ಡಾ. ಕೆ.ಎಸ್. ನರಸಿಂಹಸ್ವಾಮಿ
ಗಾಯನ: ಸಿ. ಅಶ್ವಥ್

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ
ನೆರಳು, ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ

ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ
ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ
ಕಡಲು ನಿನ್ನದೆ, ಹಡುಗು ನಿನ್ನದೆ, ಮುಳುಗದಿರಲಿ ಬದುಕು

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ,
ಮಹಾಕಾವ್ಯ, ಭಾವಗೀತೆ ನಿನ್ನ ಪದಧ್ವನಿ

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು


!-- Facebook share button Start -->